Popular posts from this blog
ನರೇಂದ್ರ ದಾಮೋದರ್ ದಾಸ್ ಮೋದಿ ಎಂಬ ವಿಶ್ವ ಕಂಡ ಅದ್ಭುತ ಶಕ್ತಿ.
✍🏻 ಸುಭಿಕ್ಷ್.ರೈ.ಪಿ Image Credit: Respected Owner ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಅದ್ಭುತ ವ್ಯಕ್ತಿ ನಮ್ಮೆಲ್ಲರ ಹೆಮ್ಮೆಯ ಭಾರತ ಹೃದಯ ಸಾಮ್ರಾಟ್ ಪ್ರಧಾನಿ ಶ್ರೀ ನರೇಂದ್ರ ಮೋದಿ. ಯಾರು ಊಹಿಸಿರದ ರೀತಿಯಲ್ಲಿ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸುವಂತ ದಿಟ್ಟ ನಿರ್ಧಾರಗಳನ್ನು ಕೈಗೊಂಡವರು ಮೋದಿಜೀ. ರಾಜಕೀಯವಾಗಿ ಎಷ್ಟೇ ಪ್ರಭಾವಿ ವ್ಯಕ್ತಿಯಾಗಿದ್ದರು ತನ್ನ ಕುಟುಂಬಕ್ಕಾಗಿ ಯಾವುದೇ ಆಸ್ತಿ ,ಸಂಪತ್ತನ್ನು ಗಳಿಸದ ದೇಶವೇ ನನ್ನ ಆಸ್ತಿ ಎಂದು ದುಡಿಯುತ್ತಿರುವ ದಣಿವರಿಯದ ಜಗಮೆಚ್ಚಿದ ನಾಯಕ. ಪ್ರಧಾನಿಯಾದ ಬಳಿಕ ಇವರು ಅನುಷ್ಟಾನಕ್ಕೆ ತಂದ ಯೋಜನೆಗಳು ಪ್ರತೀ ಹಳ್ಳಿಯ ಬಡ ಜನರಿಗೆ ತಲುಪುತ್ತಿದೆಯೆಂದರೆ ಅದು ಅವರ ಭ್ರಷ್ಟಚಾರ ರಹಿತ ಆಡಳಿತಕ್ಕೆ ನಿದರ್ಶನ. ಸ್ವಂತಕ್ಕೆ ಏನನ್ನು ಬಯಸದ ಸರ್ವಸ್ವವನ್ನು ತಾಯಿ ಭಾರತಾಂಬೆಯ ಸೇವೆಗೆ ಮುಡಿಪಾಗಿಟ್ಟವರು ಇಂದು ನಮ್ಮ ದೇಶದ ಪ್ರಧಾನಮಂತ್ರಿಗಳಾಗಿರುವುದು ನಮ್ಮೆಲ್ಲರ ಹೆಮ್ಮೆ ಮತ್ತು ಸೌಭಾಗ್ಯ. ಮೋದಿ ಜೀ ಯವರು ಬೆಳೆದು ಬಂದ ಹಾದಿ ಪ್ರತಿಯೊಬ್ಬರು ರೋಮಂಚನಗೊಳ್ಳುವಂತದ್ದು.ದೇಶಭಕ್ತ ಯುವಕರಿಗೆ ಅವರ ವ್ಯಕ್ತಿತ್ವವೇ ಸ್ಪೂರ್ತಿ. ಬಾಲ್ಯದಲ್ಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿ ಯುವಕನಾಗುವಷ್ಟರಲ್ಲಿ ಸಂಘದ ವಿಚಾರಧಾರೆಗಳಿಂದ ಪ್ರಭಾವಿತರಾಗಿ ,ಸಂಘದಿಂದ ಜೀವನದ ಉದ್ದೇಶವನ್ನು ಅರ್ಥೈಸಿಕೊಂಡು ತನ್ನದೇ ಶೈಲಿಯಲ್ಲಿ ಸೇವೆ ಸಲ್ಲಿಸಿ ...
ಯುದ್ಧ ಭೂಮಿಯಲ್ಲಿ ವರದಿಗಾರಿಕೆಯೆಂಬ ಎದೆಗಾರಿಕೆ... ✍ಸುಭಿಕ್ಷ್ ರೈ ಪಿ
ನೇರ, ದಿಟ್ಟ, ನಿರಂತರ ಎಂಬ ಸುವರ್ಣ ನ್ಯೂಸ್ನ ವಾಕ್ಯದಂತೆ ಅಜಿತ್ ಹನುಮಕ್ಕನವರ್ ನೇರವಾಗಿ, ದಿಟ್ಟತನದಿಂದ, ನಿರಂತರವಾಗಿ ಇಸ್ರೇಲ್ ಕದನ ಭೂಮಿಯಿಂದ ಯುದ್ಧ ವರದಿಗಾರಿಕೆಯನ್ನು ಮಾಡುತ್ತಿದ್ದರೆ ಅದ್ಯಾಕೋ ಅಕ್ಷರ ರಾಕ್ಷಸ ರವಿಬೆಳಗೆರೆಯವರ ಕಾರ್ಗಿಲ್ನಲ್ಲಿ ಹದಿನೇಳು ದಿನಗಳು(ಯುದ್ಧ ವರದಿ), ದಳವಿ ಯವರ ಹಿಮಾಲಯನ್ ಬ್ಲಂಡರ್ (ಯುದ್ದ ಇತಿಹಾಸ) ಕನ್ನಡಾನುವಾದ ಓದಿದಾಗ ಆದ ರೋಮಾಂಚನದ ಅನುಭವ ಈಗ ಮತ್ತೆ ಆಗುತ್ತಿದೆ. ಸ್ಮಶಾನದಂತಾದ ಇಸ್ರೇಲ್, ಪ್ಯಾಲೇಸ್ತೀನ್ ರಣಭೂಮಿಯ ಚಿತ್ರಣ ಕಣ್ಣೆದುರಿಗಿದೆ. ಬೆಳಗೆರೆಯವರ ಕಾರ್ಗಿಲ್ ಕಥನವೆ ಕಣ್ಣಿಗೆ ಕಟ್ಟಿದಂತೆ ಯುದ್ಧ ಭೂಮಿಯ ಅನುಭವವನ್ನು, ಕೆಚ್ಚೆದೆಯ ಸೈನಿಕರ ಕಿಚ್ಚನ್ನು ತೆರೆದಿಟ್ಟರೆ ಈಗ ದೃಶ್ಯ ಮಾದ್ಯಮದ ಮೂಲಕ ನಮ್ಮ ಮುಂದೆ ಅಂತಹದೆ ಭೀಕರ, ಭಯಪೀಡಿತ, ನಿರಂತರ ರಣೋತ್ಸಾಹದಲ್ಲಿರುವ, ಸೇಡಿಗಾಗಿ ಹಪಹಪಿಸುತ್ತಿರುವ ಕದನ ಭೂಮಿಯಿಂದ ನೇರ ವರದಿಯನ್ನು ಮಾಡುತ್ತಿರುವ ದಕ್ಷಿಣ ಭಾರತದ ಏಕೈಕ ದಿಟ್ಟ ಪತ್ರಕರ್ತ ಅಜಿತ್ ಹನುಮಕ್ಕನವರ್ ಹಾಗೂ ಅವರ ಜೊತೆಯಾದ ಕ್ಯಾಮಾರ ಮ್ಯಾನ್ ಮೋಹನ್ ರವರು ಅದೇ ರವಿಬೆಳಗೆರೆಯವರ ಸಾಲಿನಲ್ಲಿ ಅದಕ್ಕಿಂತಲು ಸ್ವಲ್ಪ ಭಿನ್ನವಾಗಿ ಕಾಣಿಸುತ್ತಿದ್ದಾರೆ. ಕಾರಣ ಅವರಿರುವ ಜಾಗ. ಅದು ತಾಯ್ನಾಡು ಅಂತು ಮೊದಲೆ ಅಲ್ಲ.! ಹೇಳಿ ಕೇಳಿ ಯಾವ ಕ್ಷಣದಲ್ಲಾದರು, ಏನಾದರು ಕ್ಷಣಾರ್ಧದಲ್ಲಿ ಸಂಭವಿಸಿ ಹೋಗಬಹುದಾದ ಕಡಲಾಚೆಗಿನ ನಿರಂತರ ದಾಳಿ-ಪ್ರತಿದಾಳಿಯಾಗುತ್ತಿರುವ ಯುದ್ಧಭೂಮಿ. ಅಲ್ಲಿ ನಿಂತು ಮಾಡು...
Comments
Post a Comment